‘ಅಕ್ಕಿ, ಬೇಳೆ ಕೊಡುವುದನ್ನು ನಿಲ್ಲಿಸಿದರೂ ಪರವಾಗಿಲ್ಲ. ಆದರೆ, ಮದ್ಯ ನಿಷೇಧ ಮಾಡಿ’ ಎಂದು ಆಳಂದ ತಾಲ್ಲೂಕು ಮಹಿಳೆಯರು ಹೋರಾಟ ಆರಂಭಿಸಿರುವುದಾಗಿ, ಆಳಂದದಲ್ಲಿ ನಡೆದ ಸ್ತ್ರೀಶಕ್ತಿ ಸಮಾವೇಶದಲ್ಲಿ ಹೋರಾಟಗಾರ್ತಿ ಮೇಧಾ ಪಾಟ್ಕರ್ ಹೇಳಿದ್ದಾರೆ (ಪ್ರ.ವಾ., ಫೆ. 12). ಹೀಗೆ ಮದ್ಯ ನಿಷೇಧಕ್ಕಾಗಿ ಮಹಿಳೆಯರು ಹೋರಾಟ ಆರಂಭಿಸಿರುವುದು ಶ್ಲಾಘನೀಯ.
ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಬಿಹಾರದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಮದ್ಯ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕು.
-ಕೊದ್ದಡ್ಡಿ ಮಹೇಶ್, ಶಹಾಪುರ