ಮುಂಡಳ್ಳಿ ಗ್ರಾಮ ಮನೆಗಳ ಪಕ್ಕ ಕಾಳಿಂಗ, ನಾಗರಹಾವನ್ನು ಬೆನ್ನಟ್ಟು ತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಆಗುಂಬೆ ಮಳೆಕಾಡು ತಜ್ಞ ಅಜಯ್ ಗಿರಿ ಅವರಿಗೆ ಸುದ್ದಿ ಮುಟ್ಟಿಸಿದರು. ಆದರೆ ಅವರು ಸ್ಥಳಕ್ಕೆ ಬರುವ ಹೊತ್ತಿಗೆ ಕಾಳಿಂಗ ಅರ್ಧದಷ್ಟು ಹಾವನ್ನು ನುಂಗಿಯಾಗಿತ್ತು. ಆ ಸಂದರ್ಭದಲ್ಲಿ ಯಾವುದೇ ಕಾರ್ಯಾಚರಣೆಗೆ ಅಜಯ್ ಗಿರಿ ಮುಂದಾಗಲಿಲ್ಲ. ಕಾಳಿಂಗ ಸರ್ಪ, ಹಾವನ್ನು ಆಹುತಿ ತೆಗೆದುಕೊಂಡ ಮೇಲೆ ನಿಧಾನವಾಗಿ ಕಾರ್ಯಾಚರಣೆ ನಡೆಸಿದರು. ನಂತರ ಅದನ್ನು ಹಿಡಿದು ಸಮೀಪದ ಕಾಡಿಗೆ ಬಿಟ್ಟರು.