ಸೋಮವಾರಪೇಟೆ: ಬೆಂಗಳೂರಿನ ವಿಜಯ ಬ್ಯಾಂಕ್ ತಂಡದವರು ತಾಲ್ಲೂಕು ಒಕ್ಕಲಿಗರ ಯುವ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯಲ್ಲಿ ಚಾಂಪಿಯನ್ ಆದರು.
ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಫೈನಲ್ನಲ್ಲಿ ಬೆಂಗಳೂರಿನ ಎಸ್ಬಿಎಂ ತಂಡವನ್ನು ಮಣಿಸಿದರು. ಇದರೊಂದಿಗೆ ಚಾಂಪಿಯ
ನ್ನರು ಒಕ್ಕಲಿಗರ ಕಪ್ ಹಾಗೂ ₹ 1 ಲಕ್ಷ ನಗದು ತಮ್ಮದಾಗಿಸಿಕೊಂಡರು. ರನ್ನರ್ಸ್ ಆಪ್ ಆದ ಎಸ್ಬಿಎಂ ತಂಡಕ್ಕೆ ₹ 60 ಸಾವಿರ ನಗದು ಹಾಗೂ ಟ್ರೋಫಿ ಲಭಿಸಿತು.ಪ್ರೊ ಕಬಡ್ಡಿ ಆಟಗಾರರಾದ ರೋಹಿತ್ ಮಾರ್ಲ, ಸುಕೇಶ್ ಹೆಗ್ಡೆ, ಪ್ರಶಾಂತ್ ರೈ, ಸಚಿನ್ ಉತ್ತಮ ಆಟ ಪ್ರದರ್ಶಿಸಿ ವಿಜಯ ಬ್ಯಾಂಕ್ ಗೆಲುವಿಗೆ ಕಾರಣರಾದರು.