ಚಿಕ್ಕಮಗಳೂರು: ಟೀಮ್ 13 ಚಿಕ್ಕಮಗಳೂರು ಕ್ರೀಡಾ ಸಂಸ್ಥೆ ಇದೇ 18 ಮತ್ತು 19ರಂದು ನಗರದಲ್ಲಿ ಚಿಕ್ಕಮಗ ಳೂರು ಎಫ್ಎಂಎಸ್ಸಿಐ ಸಹಯೋಗ ದಲ್ಲಿ ರಾಷ್ಟ್ರಮಟ್ಟದ 2ನೇ ಸುತ್ತಿನ ಡರ್ಟ್ ಟ್ರ್ಯಾಕ್ ಮೋಟಾರ್ ಬೈಕ್ ರ್ಯಾಲಿ ಆಯೋಜಿಸಿದೆ.
ಡಕಾರ್ ರ್ಯಾಲಿ ಖ್ಯಾತಿಯ ಬೆಂಗ ಳೂರಿನ ಸಂತೋಷ್ ಮತ್ತು ಮಂಗಳೂರಿನ ಕೆ.ಪಿ.ಅರವಿಂದ್, ಸುಹೇಲ್ ಅಹ್ಮದ್, ನಟರಾಜ್, ಅಜ್ಮತ್ ಲತೀಫ್, ನರೇಶ್, ಸೂರಜ್, ಸದ್ದಾಂ, ದಿಲೀಪ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯದ ಹಾಗೂ ಹೊರ ರಾಜ್ಯಗಳಿಂದಲೂ ಸುಮಾರು 200 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಚಿಕ್ಕಮಗಳೂರು ಮೋಟಾರ್ ಸ್ಪೋರ್ಟ್ ಕ್ಲಬ್ ಅಧ್ಯಕ್ಷ ಜಯಂತ್ ಪೈ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಗರ ಸಮೀಪದ ಮುಗುಳುವಳ್ಳಿಯ ಆರ್.ಡಿ.ಕಾಫಿ ಕ್ಯೂರಿಂಗ್ ಬಳಿ ಖಾಸಗಿ ಒಡೆತನದ ಸುಮಾರು 5 ಎಕರೆಯಲ್ಲಿ ಮೋಟಾರ್ ಬೈಕ್ ರ್ಯಾಲಿಗಾಗಿ ಪ್ರತ್ಯೇಕ ಟ್ರ್ಯಾಕ್ ಸಿದ್ಧಪಡಿಸಲಾಗಿದೆ. 18ರಂದು ಇಲ್ಲಿ ಸ್ಪರ್ಧಿಗಳು ಅಭ್ಯಾಸ ನಡೆಸಲಿದ್ದಾರೆ. ಪ್ರಮುಖ ಘಟ್ಟದ ಸ್ಪರ್ಧೆ 19ರಂದು ನಡೆಯಲಿದೆ ಎಂದು ತಿಳಿಸಿದರು.