ರಾಜಕೀಯ ಅರ್ಥ ಬೇಡ
ನವದೆಹಲಿ: ಚೀನಾದ ಪ್ರತಿಭಟನೆಯನ್ನು ತಳ್ಳಿಹಾಕಿರುವ ಭಾರತ, ತೈವಾನ್ ನಿಯೋಗದ ಭೇಟಿ ಅಸಹಜವಲ್ಲ ಮತ್ತು ಅದಕ್ಕೆ ರಾಜಕೀಯ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಪ್ರತಿಕ್ರಿಯೆ ನೀಡಿದೆ.
‘ತೈವಾನ್ನ ಶಿಕ್ಷಣ ತಜ್ಞರು, ಉದ್ಯಮಿಗಳು ಮತ್ತು ಸಂಸದರನ್ನು ಒಳಗೊಂಡ ಗುಂಪು ಭಾರತಕ್ಕೆ ಭೇಟಿ ನೀಡಿದೆ. ವ್ಯಾವಹಾರಿಕ, ಧಾರ್ಮಿಕ ಮತ್ತು ಪ್ರವಾಸದ ಉದ್ದೇಶಗಳಿಂದ ಈ ಹಿಂದೆಯೂ ಇಂತಹ ಗುಂಪುಗಳು ಭೇಟಿ ನೀಡಿದ್ದವು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.