‘ಜೀ ಕನ್ನಡ’ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್–12’ ವಿಜೇತರಾಗಿ ಅನ್ವಿತಾ ಹೊರ ಹೊಮ್ಮಿದ್ದಾರೆ. ದ್ವಿತೀಯ ಸ್ಥಾನವನ್ನು ಶ್ರೀಕರ್ ಪಡೆದುಕೊಂಡರೆ, ತೃತೀಯ ಸ್ಥಾನ ದರ್ಶನ್ ಪಾಲಾಗಿದೆ. ವೇಣುಗೋಪಾಲ್, ಅಸ್ತಾ, ವೈಷ್ಣವಿ ಅಂತಿಮ ಕಣದಲ್ಲಿದ್ದರು.
ಫೈನಲ್ಸ್ ಹಾಸನದಲ್ಲಿ ನಡೆಯಿತು. ‘ಡ್ರಾಮ ಜೂನಿಯರ್ಸ್’ ಮತ್ತು ‘ಕಾಮಿಡಿ ಕಿಲಾಡಿ’ ಕಲಾವಿದರು ಒಗ್ಗೂಡಿ ಪ್ರೇಕ್ಷಕರನ್ನು ರಂಜಿಸಿದರು. ಫೆ.18 ಮತ್ತು 19ರಂದು ರಾತ್ರಿ 8ಕ್ಕೆ ಜೀ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.
ಕಾರ್ಯಕ್ರಮದ ತುಣುಕು ಮತ್ತು ಫಲಿತಾಂಶವನ್ನು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ‘ಜೀ ಕನ್ನಡ’ ವಾಹಿನಿಯ ಪ್ರತಿನಿಧಿಗಳು ಮಾತ್ರ ‘ಫಲಿತಾಂಶ ಬಿಡುಗಡೆ ಮಾಡಲು ಸಾಧ್ಯವಿಲ್ಲ. ವಿಜೇತರ ಸಂಪರ್ಕ ಸಂಖ್ಯೆ ಕೊಡುವುದಿಲ್ಲ’ ಎಂದು ಕಬ್ಬಿಣದ ಪರದೆ ಎಳೆದುಕೊಂಡರು.