ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಬಸ್ಗಳಲ್ಲಿ ಒಂದು ತಿಂಗಳ ಅವಧಿಯಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸಿದವರಿಂದ ನಿಗಮ ₹ 6.94 ಲಕ್ಷ ದಂಡ ವಸೂಲಿ ಮಾಡಿದೆ.
ಜನವರಿ ತಿಂಗಳಲ್ಲಿ 48,112 ಬಸ್ಗಳಲ್ಲಿ ತಪಾಸಣೆ ನಡೆಸಲಾಗಿದ್ದು, 4,813 ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 6,583 ಜನ ಟಿಕೆಟ್ ಪಡೆಯದೆ ಪ್ರಯಾಣಿಸಿದ್ದಾರೆ.
ಅವರಿಂದ ₹ 9,94,909 ದಂಡ ವಸೂಲಿ ಮಾಡಲಾಗಿದೆ. ತಪ್ಪೆಸಗಿದ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಆದಾಯದಲ್ಲಿ
₹1,18,772 ಸೋರಿಕೆ ತಡೆದಂತಾಗಿದೆ ಎಂದು ನಿಗಮ ತಿಳಿಸಿದೆ.