ಬೆಂಗಳೂರು: ‘ಯುವ’ (ಯೂತ್ ಯುನೈಟೆಡ್ ಫಾರ್ ಎ ವಿಷನ್ ಟು ಅಚೀವ್) ಸ್ವಯಂ ಸೇವಾ ಸಂಸ್ಥೆಯು ಉತ್ತರ ಕನ್ನಡ ಜಿಲ್ಲೆಯಲ್ಲಿನ 150 ಮನೆಗಳಿಗೆ ಸೌರವಿದ್ಯುತ್ ಕಿಟ್ ಅಳವಡಿಸಲು ಮುಂದಾಗಿದೆ.
ಸಂಸ್ಥೆಯ ಅಧ್ಯಕ್ಷ ಧರಮ್ವೀರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ,‘ಈವರೆಗೂ ವಿದ್ಯುತ್ ಸಂಪರ್ಕ ಹೊಂದಿರದ ಹಳ್ಳಿಗಾಡಿನ ಮನೆಗಳಿಗೆ ಬೆಳಕಿನ ಸೌಲಭ್ಯ ಕಲ್ಪಿಸಲು ಸಂಸ್ಥೆ #ಬಿಎಲ್ಯುಆರ್2 ಎಂಬ ಯೋಜನೆ ರೂಪಿಸಿದೆ. ಈ ಯೋಜನೆಯ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮತ್ತು ಜೊಯಿಡಾ ತಾಲ್ಲೂಕುಗಳ 21 ಹಳ್ಳಿಗಳ 150 ಮನೆಗಳಿಗೆ ಸೌರವಿದ್ಯುತ್ ಕಿಟ್ಗಳನ್ನು ಅಳವಡಿಸುತ್ತಿದ್ದೇವೆ’ ಎಂದರು.
‘ಮನೆಗಳಿಗೆ ಸೌರವಿದ್ಯುತ್ನ ಕಿಟ್ ಅಳವಡಿಸುವ ಕೆಲಸದಲ್ಲಿ ಬೆಂಗಳೂರು ಹಾಗೂ ಮೈಸೂರಿನ ಕಾಲೇಜುಗಳ 49 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಫೆ.19, 20 ಮತ್ತು 21 ರಂದು ಕಿಟ್ಗಳ ಅಳವಡಿಸುತ್ತೇವೆ. ಯೋಜನೆಗೆ ಸುಮಾರು ₹6 ಲಕ್ಷ ವೆಚ್ಚವಾಗಲಿದೆ’ ಎಂದು ಮಾಹಿತಿ ನೀಡಿದರು.