ಚೆನ್ನೈ: ತಮಿಳುನಾಡಿನ ಹೊಸ ಸರ್ಕಾರ ವಿಶ್ವಾಸಮತ ಕೋರಲು ಶನಿವಾರ ಕರೆಯಲಾಗಿರುವ ವಿಶೇಷ ಅಧಿವೇಶನದಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರು ಗದ್ದಲ ಎಬ್ಬಿಸಿದ್ದಾರೆ.
ತಲೆ ಎಣಿಕೆ ಬದಲು ಗುಪ್ತ ಮತದಾನಕ್ಕೆ ಅವಕಾಶ ನೀಡಬೇಕು ಎಂದು ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರು ಆಗ್ರಹಿಸಿದರು. ಆದರೆ, ಇದಕ್ಕೆ ಸ್ಪೀಕರ್ ಒಪ್ಪಲಿಲ್ಲ. ಇದರಿಂದ ಕೆರಳಿದ ಡಿಎಂಕೆ ಸದಸ್ಯರು ಸ್ಪೀಕರ್ ಪೀಠದ ಎದುರಿನ ಟೇಬಲ್, ಕುರ್ಚಿ ಒಡೆದು ಮೈಕ್ಗಳನ್ನು ಮುರಿದುಹಾಕಿದ್ದಾರೆ.
ಗುಪ್ತ ಮತದಾನಕ್ಕೆ ಅವಕಾಶ ನೀಡದ ಸ್ಪೀಕರ್ ಧನಪಾಲ್ ಅವರ ವಿರುದ್ಧ ಘೋಷಣೆಗಳನ್ನು ಕೂಡಿದ ಡಿಎಂಕೆ ಸದಸ್ಯರು ಕಾಗದ ಪತ್ರ, ಫೈಲ್ಗಳನ್ನು ಹರಿದು ಸ್ಪೀಕರ್ ಪೀಠದತ್ತ ತೂರಿದ್ದಾರೆ.