ಗದ್ದಲ ಎಬ್ಬಿಸಿದ್ದರಿಂದ ಮಾರ್ಷಲ್ಗಳು ಸ್ಟಾಲಿನ್ ಅವರನ್ನು ಸದನದಿಂದ ಹೊರ ಹಾಕಿದರು. ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್ ಅವರು, ಮೈಮೇಲಿನ ಕಿತ್ತು ಹೋಗಿರುವ ಅಂಗಿಯನ್ನು ತೋರಿಸುತ್ತಾ ಮಾರ್ಷಲ್ಗಳು ಹಲ್ಲೆ ನಡೆಸಿ ಬಟ್ಟೆ ಕಿತ್ತಿದ್ದಾರೆ. ಇದು ಆಡಳಿತ ಪಕ್ಷ ನಡೆಸಿದ ಹಲ್ಲೆ. ನಮ್ಮನ್ನು ಸದನದಿಂದ ಹೊರಗಿಟ್ಟು ವಿಶ್ವಾಸಮತ ಯಾಚನೆಗೆ ಅವಕಾಶ ನೀಡಿರುವ ಸ್ಪೀಕರ್ ಅವರ ವಿರುದ್ಧ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅರಿಗೆ ದೂರು ಕೊಡಲಾಗುವುದು ಎಂದು ಹೇಳಿದರು.