ಮೂಡುಬಿದಿರೆ: ಭಾರತ ಬಾಲ್ ಬ್ಯಾಡ್ಮಿಂಟನ್ ಫೆಡರೇಷನ್ ಮಾರ್ಗ ದರ್ಶನದಲ್ಲಿ ಇಲ್ಲಿನ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ಬಾಲ್ಬ್ಯಾಡ್ಮಿಂಟನ್ ಸಂಸ್ಥೆಯ ವತಿ ಯಿಂದ ಫೆಬ್ರುವರಿ 18ರಿಂದ 22 ರವರೆಗೆ ನಡೆಯಲಿರುವ 62ನೇ ಸೀನಿಯರ್ ರಾಷ್ಟ್ರೀಯ ಪುರುಷರ ಮತ್ತು ಮಹಿಳಾ ಬಾಲ್ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ಗೆ ರಂಗ ಸಜ್ಜುಗೊಂಡಿದೆ.
ಈ ಕೂಟದಲ್ಲಿ ಪಾಲ್ಗೊಳ್ಳುವ ಕರ್ನಾಟಕ ಪುರುಷರ ತಂಡಕ್ಕೆ ಬಿ.ಎನ್.ಕಿರಣ್ ಕುಮಾರ್ ನಾಯಕತ್ವ ವಹಿಸಲಿದ್ದರೆ, ಮಹಿಳಾ ತಂಡಕ್ಕೆ ಎಂ.ಆರ್.ಕಾವ್ಯಾ ನೇತೃತ್ವ ವಹಿಸಲಿ ದ್ದಾರೆ. ಇವರಿಬ್ಬರೂ ಆತಿಥೇಯ ಆಳ್ವಾಸ್ ಶಿಕ್ಷಣ ಸಂಸ್ಥೆಯವರು.
ಪುರುಷರ ತಂಡ: ಬಿ.ಎನ್.ಕಿರಣ್ ಕುಮಾರ್, ವಿಜಯ ಕುಮಾರ್, ವಾರಿದಿ, ಗೋಪಾಲ್, ಎನ್.ವಿ. ಉಲ್ಲಾಸ್, ಎಚ್.ಎಂ. ರಂಜಿತ್, ಎಚ್. ಎಂ.ಮಹದೇವ ಸ್ವಾಮಿ, ಮನೀಶ್ ಕುಮಾರ್, ವೀರೇಂದ್ರ ಪಾಟೀಲ್, ಶ್ರೀನಿವಾಸ್. ಕೋಚ್: ಜಿ.ಬಿ. ನಾಗರಾಜ್, ಮ್ಯಾನೇಜರ್: ಮಹಮ್ಮದ್ ಇಲ್ಯಾಸ್.
ಮಹಿಳಾ ತಂಡ: ಎಂ.ಆರ್.ಕಾವ್ಯಾ, ಎಂ.ಪಿ.ರಂಜಿತಾ, ಕೆ.ಜಿ.ಯಶಸ್ವಿನಿ, ಜಯಲಕ್ಷ್ಮಿ, ಬಿ.ಡಿ.ಲಾವಣ್ಯ, ಸಂಗೀತಾ, ಎಂ.ಸುಷ್ಮಿತಾ, ಎಸ್.ಕೆ.ಪಲ್ಲವಿ, ಡಿ.ಎಸ್.ಸುಷ್ಮಿತಾ, ಲತಾ, ಕೋಚ್; ಪ್ರವೀಣ್ ಕುಮಾರ್, ಮ್ಯಾನೇಜರ್; ಜಿ.ರಶ್ಮಿ.