‘ದಲಿತ ಅಭ್ಯರ್ಥಿಯನ್ನು ನಾವು ವಿರೋಧಿಸಿಲ್ಲ. ಕಾನೂನಿನಲ್ಲಿ ಅವರಿಗೂ ಅವಕಾಶವಿದೆ. ನಾಲ್ಕು ಜನ ಕೂಡಿ ಮಾತುಕತೆ ನಡೆಸಿದ್ದರೆ ಈ ಸಮಸ್ಯೆ ಬಗೆಹರಿಯುತ್ತದೆ. ಇನ್ನು ಚಹಾ ಅಂಗಡಿ, ಹಿಟ್ಟಿನ ಗಿರಣಿ ಬಂದ್ ಮಾಡುವಂತೆ ನಾವು ಯಾರ ಮೇಲೂ ಒತ್ತಡ ಹೇರಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮದ ಸವರ್ಣೀಯರೊಬ್ಬರು ಪತ್ರಿಕೆಗೆ ತಿಳಿಸಿದರು.
* ಸೋಮವಾರ (ಫೆ. 20) ಬೆಳಿಗ್ಗೆ ಗ್ರಾಮಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸುತ್ತೇನೆ. ಬಳಿಕ ಎರಡೂ ಸಮುದಾಯದ ಮುಖಂಡರು, ಗ್ರಾಮಸ್ಥರೊಂದಿಗೆ ಚರ್ಚಿಸಿ, ಸಮಸ್ಯೆ ಇತ್ಯರ್ಥಪಡಿಸಲು ಪ್ರಯತ್ನಿಸುತ್ತೇನೆ.
-ಭ್ರಮರಾಂಬಾ ಗುಬ್ಬಿಶೆಟ್ಟಿ, ತಹಶೀಲ್ದಾರ್, ಮುಂಡರಗಿ