ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾರೂಕ್ ಪಾರ್ಥಿವ ಶರೀರ ಇಂದು ಹೈದರಾಬಾದ್‌ಗೆ

Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಗಂಗಾವತಿ (ಕೊಪ್ಪಳ ಜಿಲ್ಲೆ): ಸುಡಾನ್ ದೇಶದಲ್ಲಿ ದರೋಡೆಕೋರರ ಗುಂಡಿಗೆ ಬಲಿಯಾಗಿರುವ ಇಲ್ಲಿಯ ಯುವಕ ಸೈಯದ್ ಫಾರೂಕ್ ಪಾಷಾ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಹೈದರಾಬಾದ್‌ಗೆ ತರಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಅನಿವಾಸಿ ಭಾರತೀಯರ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ ಅವರು ರಾಜ್ಯ ಸರ್ಕಾರದ ಪರವಾಗಿ ಸುಡಾನ್ ದೇಶದ ಭಾರತದ ರಾಯಭಾರಿ ಹಾಗೂ ಮೃತನ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಪೂರಕ ದಾಖಲೆ ಹಾಗೂ ಮಾಹಿತಿ ರವಾನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇಲ್ಲಿನ ಜೆಡಿಎಸ್ ಮುಖಂಡ ಎಸ್‌.ಬಿ. ಖಾದ್ರಿ ಅವರ ಪುತ್ರ ಸೈಯದ್ ಫಾರೂಕ್ ಪಾಷಾ ಸುಡಾನ್‌ನಲ್ಲಿ  ದರೋಡೆಕೋರರ ಗುಂಡಿಗೆ ಶನಿವಾರ ಬಲಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT