ರಾಮಯ್ಯ ನಾರಾಯಣ ಹೃದಯ ಕೇಂದ್ರದ ಹೃದಯ ತಜ್ಞ ವೈದ್ಯರಾದ ಡಾ.ಯು.ಎಂ.ನಾಗಮಲ್ಲೇಶ್, ಡಾ. ಜ್ಯುಲಿಯಸ್, ಡಾ. ರವಿಶಂಕರ್ ಶೆಟ್ಟಿ, ಡಾ.ರವಿನಾಯಕ್ ಮತ್ತು ಡಾ. ಶಿಲ್ಪಾ ಅವರ ವೈದ್ಯಕೀಯ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ. ಹೃದಯ ಪಡೆದ ಯುವಕನ ಕುಟುಂಬದವರು ಜ.13 ರಂದು ಅಂಗಾಂಗ ಕಸಿಯ ವಲಯ ಸಮನ್ವಯ ಸಮಿತಿಗೆ (ಜೆಡ್ಸಿಸಿಕೆ) ಅಂಗಾಂಗಕ್ಕಾಗಿ ನೋಂದಣಿ ಮಾಡಿಕೊಂಡಿದ್ದರು.