ಮುರಾರ್ಜಿ, ಜಗಜೀವನರಾಂ, ರೆಡ್ಡಿ, ಡಾಂಗೆ ಆಯ್ಕೆ
ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಮುರಾರ್ಜಿ ದೇಸಾಯಿ, ಜಗಜೀವನರಾಂ, ಸಂಜೀವ ರೆಡ್ಡಿ ಲೋಕಸಭೆಗೆ ಗೆದ್ದಿದ್ದಾರೆ. ಯೋಜನಾ ಸಚಿವ ಅಶೋಕ ಮೆಹತಾ, ಯೋಜನಾ ಆಯೋಗದ ಮತ್ತೊಬ್ಬ ಮಾಜಿ ಸದಸ್ಯ ಡಾ. ವಿ.ಕೆ.ಆರ್.ವಿ. ರಾವ್ ಸಹ ಚುನಾಯಿತರಾಗಿದ್ದಾರೆ. ವಿರೋಧ ಪಕ್ಷಗಳ ನಾಯಕರಾದ ಎಸ್.ಎ. ಡಾಂಗೆ, ಹಿರೇನ್ ಮುಖರ್ಜಿ, ನಾಥಪೈ ಯಶಸ್ವಿಯಾಗಿದ್ಸಾರೆ. ಸ್ವತಂತ್ರ ಪಕ್ಷದ ಅಧ್ಯಕ್ಷ ಎನ್.ಜಿ. ರಂಗಾ ಪರಾಜಿತರಾಗಿದ್ದಾರೆ. ಪಕ್ಷೇತರರಾದ ಪ್ರಕಾಶ ವೀರಶಾಸ್ತ್ರೀ ಆರಿಸಿ ಬಂದಿದ್ದಾರೆ.