ನವದೆಹಲಿ (ಪಿಟಿಐ): ‘ನನ್ನ ತಂದೆಯನ್ನು ಕೊಲೆ ಮಾಡಿದ್ದು ಪಾಕಿಸ್ತಾನವಲ್ಲ, ಯುದ್ಧ’ ಎಂದು ಗುರ್ಮೆಹರ್ ಕೌರ್ ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, ‘ರಾಷ್ಟ್ರವಿರೋಧಿ ನಿಲುವು ಸಮರ್ಥಿಸಿಕೊಳ್ಳಲು ದಾವೂದ್ ಇಬ್ರಾಹಿಂ ಕೂಡ ತನ್ನ ತಂದೆ ಹೆಸರನ್ನು ಊರುಗೋಲಿನಂತೆ ಬಳಸಿಕೊಂಡಿರಲಿಲ್ಲ’ ಎಂಬ ಸಂದೇಶವಿರುವ ಚಿತ್ರವನ್ನು ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ.