ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಟ್ರಿಕ್‌ ಕನಸಲ್ಲಿ ಕರ್ನಾಟಕ

Last Updated 27 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ಮೊದಲ ಎರಡೂ ಪಂದ್ಯ ಗಳಲ್ಲಿ ಗೆಲುವು ಪಡೆದು ವಿಶ್ವಾಸ ದಲ್ಲಿರುವ ಕರ್ನಾಟಕ ತಂಡ ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಮಂಗಳವಾರ ಸೌರಾಷ್ಟ್ರ ಎದುರು ಪೈಪೋಟಿ ನಡೆಸಲಿದೆ.

ವಿನಯ್‌ ಕುಮಾರ್ ಗಾಯ ಗೊಂಡಿ ರುವ ಕಾರಣ ಭರವಸೆಯ ಬ್ಯಾಟ್ಸ್‌ಮನ್‌ ಮನೀಷ್ ಪಾಂಡೆ  ಅವರು ರಾಜ್ಯ ತಂಡ ವನ್ನು ಮುನ್ನಡೆಸುತ್ತಿದ್ದಾರೆ. ಕರ್ನಾಟಕ ಮೊದಲ ಎರಡು ಪಂದ್ಯಗಳಲ್ಲಿ ಕ್ರಮ ವಾಗಿ ಜಾರ್ಖಂಡ್ ಮತ್ತು ಸರ್ವಿಸಸ್‌ ಎದುರು ಗೆಲುವು ಪಡೆದು ಒಟ್ಟು ಎಂಟು ಪಾಯಿಂಟ್ಸ್‌ ಹೊಂದಿದೆ.

ನಾಕೌಟ್‌ ಪ್ರವೇಶದ ಹಾದಿ ಸುಗಮ ಮಾಡಿಕೊಳ್ಳಲು ರಾಜ್ಯ ತಂಡ ಸೌರಾಷ್ಟ್ರ ವಿರುದ್ಧವೂ ಜಯದ ಓಟ ಮುಂದು ವರಿಸಬೇಕಿದೆ. ಉಭಯ ತಂಡಗಳು ಕೊನೆಯ ಬಾರಿಗೆ ರಣಜಿಯಲ್ಲಿ ಮುಖಾ ಮುಖಿಯಾಗಿದ್ದವು.

ಪಟಿಯಾಲದಲ್ಲಿ ನಡೆದಿದ್ದ ಪಂದ್ಯ ದಲ್ಲಿ ಸೌರಾಷ್ಟ್ರ ತಂಡ ಕರ್ನಾಟಕ ಎದುರು ಗೆಲುವು ಪಡೆದಿತ್ತು. ಜಯ ದೇವ್ ಷಾ ನಾಯಕರಾಗಿರುವ ಸೌರಾಷ್ಟ್ರ ಪಾಯಿಂಟ್ಸ್‌ ಖಾತೆ ಆರಂಭಿಸಲು ಇನ್ನೂ ಪರದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT