ಬೆಳಗಾವಿ: ಸಮೀಪದ ಕೋಳಿಕೊಪ್ಪದ ಲ್ಲಿಯ ಮಹಾವೀರ ವಿಹಾರಧಾಮ ಗೋ ಶಾಲೆಗೆ 5 ಟನ್ ಮೇವಿನ ಹೊಟ್ಟು ವಿತರಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ಸೋಮವಾರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರ ಜನ್ಮ ದಿನ ಆಚರಿಸಿದರು.
ಮಹಾನಗರದ ಬಿಜೆಪಿ ಉಪಾಧ್ಯಕ್ಷ ವೀರೇಶ ಕಿವಡಸಣ್ಣವರ ನೇತೃತ್ವದಲ್ಲಿ ಗೋವುಗಳಿಗೆ ಮೇವು ವಿತರಿಸಿದರು.
ಪಕ್ಷದ ಮುಖಂಡ ವೀರೇಶ ಕಿವಡಸಣ್ಣವರ ಮಾತನಾಡಿ, ಭಾರತವು ಹಿಂದೂ ಸಂಸ್ಕೃತಿ ತಳಹದಿಯ ಮೇಲೆ ನಿಂತಿದೆ. ಹಿಂದೂಗಳಿಗೆ ಗೋವು ದೇವತೆಗೆ ಸಮನಾದದ್ದು. ಅವುಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಯುವ ಜನತೆ ಗೋವುಗಳ ರಕ್ಷಣೆಗೆ ಎಲ್ಲರೂ ಹೋರಾಟ ಮಾಡಬೇಕು ಎಂದು ಹೇಳಿದರು.
ಗೋ ರಕ್ಷಣಾ ವೇದಿಕೆಯ ರಾಜೇಂದ್ರ ಜೈನ್ ಮಾತನಾಡಿ, ಪ್ರಾಣಿಗಳ ರಕ್ಷಣೆ ಮೂಲಕ ಜನ್ಮ ದಿನ ಆಚರಿಸುವುದು ಸಂತಸದ ಸಂಗತಿ ಎಂದರು.
ಗೋ ಶಾಲೆ ಅಧ್ಯಕ್ಷ ಜಬ್ಬರಚಂದ್ ಜೈನ್, ಹೇಮೇಂದ್ರ ಪೋರವಾಲ್, ಶೈಲೇಶ್ ಮೇಹ್ತಾ, ವಿಕ್ರಂ ಜೈನ್, ಅಭಿಜಿತ್ ಶಾ, ಅಭಯ್ ಜೋಶಿ, ರಮೇಶ್ ಕಮತಗೌಡರ್, ರವಿ ಮೆಳವಂಕಿ, ವಿನಾಯಕ ಮದಲಬಾವಿ, ರಾಹುಲ್ ಕಾಕತಿಕರ್, ಶಿವಕುಮಾರ ಮುನ್ನೊಳಿ, ಶಶಾಂಕ ತೆರದಾಳೆ, ಅಮಿತ್ ಪಾಚಂಗಿ, ಅಭಿಷೇಕ ಲಕ್ಕುಂಡಿ, ರಾಹುಲ್ ಕಾಂಬಳೆ, ರಘು ಪತ್ತಾರ ಇದ್ದರು.