ರಾಣೆಬೆನ್ನೂರು: ಬಂಗಾರದ ಆಭರಣ ಗಳನ್ನು ಖರೀದಿಸಿ ಹಣ ನೀಡದೇ ವಂಚನೆ ಮಾಡಿದ ಇಬ್ಬರು ಮಹಿಳಾ ಆರೋಪಿಗಳನ್ನು ಗುರುವಾರ ಬಂಧಿಸಿ, ಆರೋಪಿಗಳಿಂದ 1.9 ಕೆಜಿ ತೂಕದ ಬಂಗಾರದ ಆಭರಣಗಳನ್ನು ಪೊಲೀ ಸರು ವಶಪಡಿಸಿಕೊಂಡು ಆರೋಪಿ ಗಳನ್ನು ನ್ಯಾಯಾಂಗ ವಶಕ್ಕೆ ಒಳಪಡಿಸಿದ್ದಾರೆ.
ನಗರದ ಇಸ್ಕಾನ್ಗಲ್ಲಿಯ ನುಸ್ರತ್ಖಾನ್ ಅಯ್ಯಾತಾಕಾನ್ ಸೌದಾಗರ (38) ಉಮ್ಮೇಹಾನಿ ಜಾಕೀರಖಾನ್ ಹೊನ್ನಾಳಿ (36) ಇಬ್ಬರು ಬಂಧಿತ ಆರೋಪಿಗಳು.
ನಗರದ ರುಷಬ್ ಬಂಗಾರದ ಅಂಗಡಿಯಿಂದ 2016 ಜೂನ್ ತಿಂಗಳಲ್ಲಿ ಪರಿಚಯಸ್ಥರ ಮದುವೆ ಸಮಾರಂಭ ಇದ್ದು ಮದುವೆಗೆ ಬಂಗಾರ ಆಭರಣಗಳು ಬೇಕಾಗಿದೆ. ₹ 35 ಲಕ್ಷ ಬೆಲೆ ಬಾಳುವ 1.9 ಕೆ.ಜಿ ಬಂಗಾರದ ಆಭರಣಗಳನ್ನು ಮನೆಗೆ ತೋರಿಸಿ ಕೊಂಡು ವಾಪಸ್ಸು ಬರುತ್ತೇವೆ ಎಂದು ಹೋಗಿದ್ದರು.
ಅಂಗಡಿ ಮಾಲೀಕರು ಅವರ ಮನೆಗೆ ಹೋಗಿ ಮರುದಿನ ಆಭರಣಗಳ ಬಗ್ಗೆ ವಿಚಾರಿಸಿದಾಗ ಆಭರಣಗಳು ಒಪ್ಪಿಗೆಯಾಗಿದ್ದು ಮರುದಿನ ಬಂದು ಹಣ ನೀಡುತ್ತೇವೆ ಎಂದು ಹೇಳಿ ಕಳಿಸಿದ್ದರು.
ಪುನಃ ವಿಚಾರಿಸಿದಾಗ ಆಭರಣ ತೆಗೆದುಕೊಂಡವರು ಹಾಸನಕ್ಕೆ ಹೋಗಿದ್ದಾರೆ. ಎರಡು ಮೂರುದಿನ ಬಿಟ್ಟು ಬಂದು ಹಣ ನೀಡುತ್ತೇವೆ ಎಂದವರು ಮತ್ತೆ ನೋಟು ರದ್ದತಿ ಯಿಂದ ಸ್ವಲ್ಪ ತೊಂದರೆಯಾಗಿದೆ ಸಹ ಕಾರ ನೀಡಿ ಎಂದು ಮನವಿ ಮಾಡಿದ ವರು ತಿಂಗಳು ಗತಿಸಿದರೂ ಹಣಕ್ಕಾಗಿ ಕಾದ ಅಂಗಡಿ ಮಾಲೀಕ ಹಣ ಕೊಡು ವಂತೆ ಒತ್ತಾಯಿಸಿದಾಗ ಆರೋಪಿಗಳು ಆತ್ನಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದರು.