ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅವರಿಗೆ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ನೀಡುವ ಅತ್ಯುತ್ತಮ ಸಂವಹನಕಾರ (ಸರ್ಕಾರಿ ಸಂಸ್ಥೆ) ಪ್ರಶಸ್ತಿ ದೊರೆತಿದೆ.
ನಗರದಲ್ಲಿ ಶನಿವಾರ ನಡೆದ 11ನೇ ಜಾಗತಿಕ ಸಂವಹನ ಸಮ್ಮೇಳನದಲ್ಲಿ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಪ್ರಶಸ್ತಿ ಪ್ರದಾನ ಮಾಡಿದರು.
ವಾರ್ತಾ ಇಲಾಖೆಯ ಪ್ರಕಟಣಾ ವಿಭಾಗಕ್ಕೆ ಒಟ್ಟು ಮೂರು ಪ್ರಶಸ್ತಿಗಳು ಲಭಿಸಿವೆ. ಇಲಾಖೆ ಹೊರತಂದಿರುವ ಗಾಂಧೀಜಿ ಕುರಿತ ಪುಸ್ತಕಕ್ಕೆ ಅತ್ಯುತ್ತಮ ಪ್ರಕಟಣೆ ಪ್ರಶಸ್ತಿ ಲಭಿಸಿದೆ. ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ಕಂಬಿ ಮತ್ತು ಎಚ್.ಬಿ. ದಿನೇಶ್ ಪ್ರಶಸ್ತಿ ಸ್ವೀಕರಿಸಿದರು.