**
‘ಸ್ಪರ್ಧಿಸುವವರಿಗೆ ತಡೆ ಇಲ್ಲ: ಒಮ್ಮತದ ಆಯ್ಕೆಗೆ ಯತ್ನ’
ನವದೆಹಲಿ, ಮಾ. 5– ‘ಕೇಂದ್ರದಲ್ಲೇ ಆಗಲಿ, ರಾಜ್ಯಗಳಲ್ಲೇ ಆಗಲಿ ನಾಯಕತ್ವಕ್ಕೆ ಸ್ಪರ್ಧಿಸದಂತೆ ಯಾರಿಗೇ ಆದರೂ ತಡೆಯೊಡ್ಡಲು ಸಾಧ್ಯವಿಲ್ಲ. ಎಲ್ಲರಿಗೂ ಸ್ಪರ್ಧಿಸಲು ಹಕ್ಕಿದೆ. ಆದರೆ ಪರಸ್ಪರ ಮಾತುಕತೆಗಳಿಂದ ಸ್ಪರ್ಧೆಯನ್ನು ತಪ್ಪಿಸಲು ಸಾಧ್ಯವಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಕಾಮರಾಜರು ಇಂದು ಇಲ್ಲಿ ನುಡಿದರು.