ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಚಗೊಂಡನಹಳ್ಳಿ: ರೈತ ಆತ್ಮಹತ್ಯೆ

ಸಾಲ ಒತ್ತಡದಿಂದ ನೇಣಿಗೆ ಶರಣು
Last Updated 7 ಮಾರ್ಚ್ 2017, 4:49 IST
ಅಕ್ಷರ ಗಾತ್ರ
ಹೊನ್ನಾಳಿ: ತಾಲ್ಲೂಕಿನ ಕೊಡಚಗೊಂಡನಹಳ್ಳಿ ಗ್ರಾಮದ ರೈತ ಎಚ್.ಎಂ. ಮಂಜುನಾಥ್ (50) ಸಾಲ ಒತ್ತಡದಿಂದ ಮನೆಯಲ್ಲಿಯೇ ನೇಣು ಹಾಕಿ ಕೊಂಡು ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನ್ಯಾಮತಿ ಪಿಎಸ್ಐ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
 
10 ಎಕರೆ ಜಮೀನು ಹೊಂದಿದ್ದ ಅವರು, ಇತ್ತೀಚೆಗೆ ನೀರಿಗಾಗಿ 4 ಕೊಳವೆಬಾವಿಗಳನ್ನು ಕೊರೆಸಿದ್ದರು. ನೀರು ಸಿಗದ ಕಾರಣ ಮಾಡಿದ್ದ ಸಾಲ ತೀರಿಸುವ ಬಗೆ ಕಾಣದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರಿಗೆ ಪತ್ನಿ ಗೌರಮ್ಮ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ. 
 
ಜಿಲ್ಲಾ ಪಂಚಾಯ್ತಿ ಸದಸ್ಯ ಡಿ.ಜಿ. ವಿಶ್ವನಾಥ್ ಅವರು ಮಂಜುನಾಥ್ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ‘ರೈತರು ಆತ್ಮಹತ್ಯೆ ಶರಣಾಗಬಾರದು. ಬ್ಯಾಂಕಿನವರು ಸಾಲ ವಸೂಲಿಗೆ ಬರದಂತೆ ನಾವು ನೋಡಿಕೊಳ್ಳುತ್ತೇವೆ’ ಎಂದರು.  ಪ್ರಕರಣ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT