ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಗೆದು ಬಚ್ಚಿಟ್ಟುಕೊಳ್ಳಿ,ಇಲ್ಲ ತುಳಿದು ಕಾಲ್ತೊಳೆದುಕೊಳ್ಳಿ: ನಟ ಧನಂಜಯ್‌

ನೀವು ಚಿತ್ರಮಂದಿರಕ್ಕೆ ಬಂದರೆ ಚಿತ್ರದ ಉಳಿವು
Last Updated 7 ಮಾರ್ಚ್ 2017, 13:28 IST
ಅಕ್ಷರ ಗಾತ್ರ

ಬೆಂಗಳೂರು: ’ಎಲ್ಲ ಅಹಂ ಬಿಟ್ಟು ನಿಮ್ಮ ಮುಂದೆ ಕೇಳಿಕೊಳ್ಳಿತ್ತಿದ್ದೇನೆ ’ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ನಟ ಧನಂಜಯ್‌ ಎರಡನೇಸಲ ಸಿನಿಮಾ ವೀಕ್ಷಿಸಲು ಮನವಿ ಮಾಡಿದ್ದಾರೆ.

ಮಂಡಿಯೂರಿ ಬೇಡುವೇನು,ಹೃದಯ ಕಾಲಡಿಯಿಡುವೆನು, ತೆಗೆದು ಬಚ್ಚಿಟ್ಟುಕೊಳ್ಳಿ, ಇಲ್ಲ ತುಳಿದು ಕಾಲ್ತೊಳೆದುಕೊಳ್ಳಿ! ಬೇಡ ಈ ಮೌನ, ಮಾಡಿ ತೀರ್ಮಾನ ಎನ್ನುವ ಮೂಲಕ ಚಿತ್ರಮಂದಿರಕ್ಕೆ ಬರುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಕೊಂಡಿದ್ದಾರೆ.

ಸಿನಿಮಾ ವೀಕ್ಷಣೆಗೆ ಹೆಚ್ಚೆಚ್ಚು ಜನರು ಬಂದು, ಸಿನಿಮಾವನ್ನು ಉಳಿಸಬೇಕೆಂದು ಮಾಡಿರುವ ಮನವಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಚಿತ್ರ ಪ್ರದರ್ಶನ ರದ್ದುಗೊಳಿಸಲು ತೀರ್ಮಾನಿಸಲಾಗಿದೆ.

ಇನ್ನೂ ಚಿತ್ರ ಪ್ರದರ್ಶನ ರದ್ದುಗೊಂಡಿರುವ ಕುರಿತು ಧನಂಜರ್‌ ಫೇಸ್‌ಬುಕ್‌ನಲ್ಲಿ ‘ಒಂದು ಸಿನಿಮಾ ನನ್ನದು ಮಾತ್ರ, ಉಳಿದವರೆಲ್ಲರೂ ನನ್ನ ಆಟಿಕೆಗಳು ಎಂಬ ಯೋಚನೆ ಇರುವವರಿಗೆ, ಒಂದು ಪ್ರಶ್ನೆ. ಒಂದು ಗಿಡ ಮಣ್ಣಿನದ್ದೋ ಅಥವಾ ಬೀಜದ್ದೋ?’ ಎಂದು ಪ್ರಶ್ನಿಸಿದ್ದಾರೆ.

[Related]

ಚಿತ್ರದ ನಾಯಕಿ ಸಂಗೀತ ಭಟ್‌ ಜತೆಗೆ ನಾಯಕ ಧನಂಜಯ್‌:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT