ಸ್ವಚ್ಚತೆ ಇಲ್ಲದ ಕಾರಣ ಮೂಗು ಮುಚ್ಚಿ ಸ್ನಾನ ಮಾಡಬೇಕು. ನಿರ್ಮಿತಿ ಕೇಂದ್ರದಿಂದ ನಿರ್ಮಿಸಿರುವ ನೂತನ ಶೌಚಾಲಯಗಳಿಗೆ ನೀರಿನ ಸಂಪರ್ಕ ನೀಡದ ಕಾರಣ ಬಯಲಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಬೇಕಾಗಿದೆ. ನಿಲಯದಲ್ಲಿ 8 ರಿಂದ 10 ವಿದ್ಯಾರ್ಥಿಗಳು ಮಲಗುತ್ತಿದ್ದಾರೆ. ಕೆಲವರು ಮನೆಗೆ ತೆರಳುತ್ತಾರೆ ಎಂದು ವಿದ್ಯಾರ್ಥಿಗಳು ವಿವರಿಸಿದರು.
‘ನಿಲಯದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಲಕ್ಕೂರು ಗ್ರಾಮದವರಾಗಿದ್ದಾರೆ. ಊಟ ಮುಗಿದ ನಂತರ ಮನೆಗಳಿಗೆ ತೆರಳುತ್ತಿದ್ದಾರೆ. ದಾಖಲಾತಿಯಲ್ಲಿ ವಿದ್ಯಾರ್ಥಿಗಳ ವಿಳಾಸ, ಪಕ್ಕದ ಗ್ರಾಮಗಳ ಹೆಸರನ್ನು ನಮೂದಿಸಿ ಮೋಸ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಅರ್ಜಿಗಳಲ್ಲಿನ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ವಿಚಾರಿಸಿದರೆ ಎಲ್ಲ ವಿದ್ಯಾರ್ಥಿಗಳು ಲಕ್ಕೂರು ಗ್ರಾಮದವರೇ ಆಗಿರುತ್ತಾರೆ.
ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ನಾಗೇಶ್ ತಿಳಿಸಿದರು. ಪಿಡಿಒ ಎಸ್.ಪಿ.ಕಾಶಿನಾಥ್, ಸದಸ್ಯ ಕೋಡಿಹಳ್ಳಿ ರಾಜಪ್ಪ, ತಾಳಕುಂಟೆ ಮುನಿರಾಜು, ಮುಖಂಡ ಫಯಾಜ್, ಹಾಜರಿದ್ದರು.