ಜಿಲ್ಲಾ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಬಾಲಸುಂದರ್ ಮಾತನಾಡಿ, ‘416 ಹೆಕ್ಟೇರ್ನಲ್ಲಿ ಬಿತ್ತನೆಗೆ 2,386 ಮೇವಿನ ಕಿಟ್ ವಿತರಿಸ ಲಾಗಿತ್ತು. ಪ್ರತಿ ಕಿಟ್ 6 ಕೆಜಿ ತೂಕ ಇರುತ್ತದೆ. 1,450 ರೈತರಿಗೆ ಕಿಟ್ ವಿತರಿಸಲಾಗಿದೆ’ ಎಂದು ಸಭೆಗೆ ವಿವರಿಸಿದರು.
ನರೇಂದ್ರ ಮಾತನಾಡಿ, ‘ಜಿಲ್ಲೆ ಯಲ್ಲಿ ಕಿಟ್ ಪಡೆದ ಯಾರೊಬ್ಬರು ಮೇವು ಬೆಳೆದಿಲ್ಲ. ಅಧಿಕಾರಿಗಳ ಈ ಬಗ್ಗೆ ಪರಿಶೀಲನೆ ನಡೆಸುತ್ತಿಲ್ಲ. ಸಭೆಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಳ್ಳಾರಿಯಿಂದ ಮೇವು ಪೂರೈಕೆ: ಸಚಿವ ಖಾದರ್ ಮಾತನಾಡಿ, ‘ಅಗತ್ಯ ವಿರುವೆಡೆ ಗೋಶಾಲೆ ತೆರೆಯಲು ಮೇವು ಸಂಗ್ರಹಿಸಬೇಕು. ಹಾಲಿ ಇರುವ ಗೋಶಾಲೆಗಳಿಗೂ ಸಮರ್ಪಕ ವಾಗಿ ಮೇವು ಪೂರೈಸಬೇಕು. ಯಾವುದೇ ತೊಂದರೆ ತಲೆ ದೋರ ದಂತೆ ಎಚ್ಚರಿಕೆ ವಹಿಸಬೇಕು’ ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ರಾಮು ಮಾತನಾಡಿ, ‘ಬಳ್ಳಾರಿಯಿಂದ ಪುಡಿಮೇವು ಪೂರೈಕೆಯಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ್ದೇನೆ’ ಎಂದು ತಿಳಿಸಿದರು. ಡಾ.ಬಾಲಸುಂದರ್ ಮಾತನಾಡಿ, ‘ಬಳ್ಳಾರಿಯಿಂದ 400 ಟನ್ ಮೇವು ತರಿಸಿಕೊಳ್ಳಲು ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.
‘ಗಿರಿಜನರಿಗೆ ಸೌಲಭ್ಯ ತಲುಪಿಲ್ಲ’
ಚಾಮರಾಜನಗರ: ಚಾಮರಾಜ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗಿರಿಜನರಿಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಗತ್ಯ ಸೌಲಭ್ಯ ದೊರೆತಿಲ್ಲ. ಅನುದಾನವಿದ್ದರೂ ಬಳಕೆಯಾಗಿಲ್ಲ’ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ದೂರಿದರು.
ಸಭೆಯಲ್ಲಿ ಮಾತನಾಡಿದ ಅವರು, ‘ಒಟ್ಟು ₹ 18.26 ಕೋಟಿಗೆ ಕ್ರಿಯಾಯೋಜನೆ ತಯಾರಿಸಲಾಗಿತ್ತು. ಗಿರಿಜನ ಉಪ ಯೋಜನೆಯಡಿ ಕುರಿ ವಿತರಿಸಿಲ್ಲ. ನನ್ನ ಅನುಮತಿ ಇಲ್ಲದೆ ಕೆಲವು ಕಾಮಗಾರಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನು ಮೋದನೆ ನೀಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸರಸ್ವತಿ ಉಮಾತನಾಡಿ, ‘ಜಿಲ್ಲೆಯ ಎಲ್ಲ ಕ್ಷೇತ್ರದ ಶಾಸಕರು, ಸಂಸದರು ಮತ್ತು ಜಿಲ್ಲಾಧಿಕಾರಿ ಅವರ ಸಮ್ಮುಖ ದಲ್ಲಿಯೇ ಗಿರಿಜನ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿತ್ತು. ಇದರನ್ವಯ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ’ ಎಂದು ಸಭೆಗೆ ವಿವರಿಸಿದರು.
ಸಚಿವ ಖಾದರ್ ಮಾತನಾಡಿ, ‘ಗಿರಿಜನರ ಕಲ್ಯಾಣ ಕಾರ್ಯಕ್ರಮ ಸಂಬಂಧ ವಿಧಾನಸಭಾ ಕ್ಷೇತ್ರವಾರು ನಿಗದಿಯಾಗಿರುವ ಅನುದಾನ ಮತ್ತು ವೆಚ್ಚದ ಮಾಹಿತಿ ಸಲ್ಲಿಸಬೇಕು’ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.