ಕುಶಾಲ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿರುವ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರದ ಶೂಟಿಂಗ್ ಇತ್ತೀಚೆಗೆ ಪೂರ್ಣಗೊಂಡಿತು. ಬೆಂಗಳೂರು, ಹಾಸನ, ಚಿಕ್ಕಮಗಳೂರು, ಶ್ರೀರಂಗಪಟ್ಟಣ ಸುತ್ತಮುತ್ತ ಚಿತ್ರದ ಅಂತಿಮ ದೃಶ್ಯಗಳನ್ನು ಛಾಯಾಗ್ರಾಹಕ ರಿಷಿಕೇಶ್ ಚಿತ್ರೀಕರಿಸಿಕೊಂಡರು.
ರಂಜಿತ್ ಗೌಡ ನಿರ್ಮಿಸುತ್ತಿರುವ ಚಿತ್ರದ ತಾರಾಗಣದಲ್ಲಿ ಅವಿನಾಶ್, ಕೃಷಿ ತಾಪಂಡ, ಚಿಕ್ಕಣ್ಣ, ದತ್ತಣ್ಣ, ರಂಗಾಯಣ ರಘು, ಮಿಮಿಕ್ರಿ ಗೋಪಿ, ಜಯಶ್ರೀ, ಎಂ.ಎಸ್. ಉಮೇಶ್, ಸುಚೇಂದ್ರ ಪ್ರಸಾದ್, ಮುಂತಾದವರಿದ್ದಾರೆ.
* ‘ಮಿಸ್ಟರ್ ಪರ್ಫೆಕ್ಟ್’ಗೆ ಶರಣ್ ದನಿ
ಎ. ರಮೇಶ್ ಬಾಬು ನಿರ್ದೇಶಿಸುತ್ತಿರುವ ‘ಮಿಸ್ಟರ್ ಪರ್ಫೆಕ್ಟ್’ ಚಿತ್ರದ ಹಾಡೊಂದನ್ನು ನಟ ಶರಣ ಹಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಬರೆದಿರುವ ‘ರೈಟ್ ರೈಟ್ ರೈಟ್ ಸಿಂಗಾರವ್ವ’ಎಂಬ ಹಾಡಿಗೆ ಸಂಗೀತ ಸತೀಶ್ ಬಾಬು ಸಂಗೀತ ಸಂಯೋಜನೆ ಮಾಡಿದ್ದಾರೆ.
ಅನೂಪ್ ಸಾ.ರಾ. ಗೋವಿಂದು ಮತ್ತು ಶಾಲಿನಿ ನಾಯಕ– ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಪ್ರಭಾಕರ್ ರೆಡ್ಡಿ ಛಾಯಾಗ್ರಹಣ ಮತ್ತು ಕುಮಾರ್ ಕೋಟೆಕೊಪ್ಪ ಸಂಕಲನವಿದೆ. ರಮೇಶ್ ಭಟ್, ಬುಲೆಟ್ ಪ್ರಕಾಶ್ ಮುಂತಾದವರು ತಾರಾಗಣದಲ್ಲಿದ್ದಾರೆ.