ದಿನ, ವಾರ, ಮಾಸಿಕ ಪ್ರಕಟಣೆಯ ಪತ್ರಿಕೆಗಳೆಂದು ಹೆಸರಿಟ್ಟು, ಅವುಗಳನ್ನು ಸರ್ಕಾರಿ ಜಾಹೀರಾತುಗಳು ಬಂದಾಗ ಮಾತ್ರ ಪ್ರಕಟಿಸುತ್ತಾರೆ. ಜಾಹೀರಾತು ಬಾರದಿದ್ದಾಗ ಸರ್ಕಾರಿ ಕಚೇರಿಗಳಿಗೆ ಎಡತಾಕಿ ಅಲ್ಲಿರುವ ಅಧಿಕಾರಿ, ನೌಕರರಿಗೆ ಮಾನಸಿಕ ಕಿರುಕುಳ ಕೊಟ್ಟು ಹಣ ವಸೂಲಿ ದಂಧೆಗೆ ಇಳಿಯುತ್ತಾರೆ. ಇಂತಹವರ ವಿರುದ್ಧ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು.
-ವಿ.ಜಿ.ಇನಾಮದಾರ, ಸಾರವಾಡ, ವಿಜಯಪುರ ಜಿಲ್ಲೆ