ಇಂದಿನ ಸ್ಪರ್ಧಾತ್ಮಕ ಯುಗದ ಭರದಲ್ಲಿ ಮಕ್ಕಳ ಮೇಲೆ ಪೋಷಕರು ಅತಿಯಾದ ಒತ್ತಡ ಹೇರುವುದು ಸಾಮಾನ್ಯ ಸಂಗತಿಯಾಗಿದೆ. ಮಕ್ಕಳ ಮೆದುಳು ಭವಿಷ್ಯತ್ತಿನ ರೂಪುರೇಷೆಗಳನ್ನು ಅರಳಿಸುವ ಚಿಲುಮೆಯೇ ಹೊರತು, ಒತ್ತಾಯಪೂರ್ವಕ ನಿರ್ಣಯಗಳನ್ನು ತುಂಬಿಸುವ ಕಸದ ತೊಟ್ಟಿಯಲ್ಲ ಎಂಬುದನ್ನು ಪಾಲಕರು ಮತ್ತು ಶಿಕ್ಷಕರು ಅರಿಯಲಿ.
–ಶ್ರೀನಿವಾಸ ಧ. ವಾಲಿ, ಹುಬ್ಬಳ್ಳಿ