ಬುಧವಾರ ಮಹಿಳಾದಿನಾಚರಣೆ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಮುಖಂಡರೂ ಆಗಿರುವ ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂಜಯ್ ಸಿಂಗ್ ಎಂಬವರು ತನ್ನ ಮಗಳು ಇಚ್ಛಿತಾ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದು ಹತ್ಯೆ, ಮಗಳ ಸಾವಿಗೆ ನ್ಯಾಯ ಒದಗಿಸಿಕೊಡಿ ಎಂದು ಸಿಎಂ ಮುಂದೆ ಅಂಗಲಾಚಿದ್ದಾರೆ. ಸಂಜಯ್ ಸಿಂಗ್ ಅವರು ರಘುಭರ್ ದಾಸ್ ಅವರಲ್ಲಿ ಮಾತನಾಡಲೆಂದು ವೇದಿಕೆ ಹತ್ತಿದಾಗ ಸಿಟ್ಟಿಗೆದ್ದ ದಾಸ್, ಫೋಟೊ ತೆಗೆಸಿಕೊಳ್ಳುವ ಸಲುವಾಗಿ ರಾಜಕೀಯ ಮಾಡ್ತಾರೆ. ಇವರನ್ನು ಹೊರಗೆ ಕಳಿಸಿ. ಮಗಳು ಸತ್ತಿದ್ದಾಳೆ, ಅಪ್ಪ ರಾಜಕೀಯ ಮಾಡ್ತಾನೆ ಎಂದು ಹೇಳಿ ಅವಮಾನ ಮಾಡಿದ್ದಾರೆ.