ನವದೆಹಲಿ: ‘ಉತ್ತರ ಪ್ರದೇಶದಲ್ಲಿ ಬಿಜೆಪಿ ಎಬ್ಬಿಸಿರುವುದು ಹೊಂಡದಲ್ಲಿನ ಸಣ್ಣ ಅಲೆಗಳಲ್ಲ, ಬದಲಿಗೆ ಸುನಾಮಿಯ ದೈತ್ಯ ಅಲೆ, ಆದ್ದರಿಂದ ವಿರೋಧ ಪಕ್ಷಗಳು 2019ರ ಚುನಾವಣೆಯನ್ನು ಮರೆತು 2024ರ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಸಲಹೆ ಮಾಡಿದ್ದಾರೆ.