ಈ ಟೂರ್ನಿಗೆ ಮನೀಷ್ ಪಾಂಡೆ ನಾಯಕರಾಗಿದ್ದು ಇವರ ಮುಂದಾಳತ್ವದಲ್ಲಿ ರಾಜ್ಯ ತಂಡ ಉತ್ತಮ ಸಾಮರ್ಥ್ಯ ನೀಡುತ್ತಿದೆ. ಲೀಗ್ನಲ್ಲಿ ಕ್ರಮವಾಗಿ ಜಾರ್ಖಂಡ್, ಸರ್ವಿಸಸ್, ಸೌರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ಹೈದರಾಬಾದ್ ಮತ್ತು ಛತ್ತೀಸಗಡ ಎದುರು ಗೆಲುವು ಪಡೆದಿದೆ. ಅಜೇಯ ಸಾಧನೆ ಮೂಲಕ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನಾಕೌಟ್ ಪ್ರವೇಶಿಸಿದ್ದು ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದೆ.