ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ರೌಡಿಗಳ ಗೂಂಡಾಗಿರಿ

Last Updated 12 ಮಾರ್ಚ್ 2017, 7:32 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ರಾಮಮೂರ್ತಿನಗರದ ರಾಜು ಎಂಬುವರ ಮನೆಗೆ ರೌಡಿಗಳು ನುಗ್ಗಿ ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ.

ಇಬ್ಬರು ರೌಡಿಗಳು ಮನೆಯ ಕಾಂಪೌಂಡ್‌ ಹಾರಿ ಬಂದು ರಾಜು ಮತ್ತು ಅವರ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆ.

ರಾಜು ಅವರ ಮನೆ ಪಕ್ಕದಲ್ಲಿ ದೇವಸ್ಯ ಎಂಬುವರು ಮನೆ ನಿರ್ಮಿಸುತ್ತಿದ್ದಾರೆ. ದೇವಸ್ಯ ಕೇರಳ ಮೂಲದ ಐಟಿ ಅಧಿಕಾರಿ ಎನ್ನಲಾಗಿದೆ. ಮೂರು ಅಡಿ ಜಾಗ ಬಿಟ್ಟು ಮನೆ ಕಟ್ಟುವಂತೆ ರಾಜು ದೇವಸ್ಯ ಅವರಿಗೆ ಹೇಳಿದ್ದರು. ಆದರೆ, ದೇವಸ್ಯ ಜಾಗ ಬಿಡಲು ನಿರಾಕರಿಸಿದ್ದರು ಎನ್ನಲಾಗಿದೆ.

ದೇವಸ್ಯ ಅವರು ನಿಯಮದಂತೆ ಮನೆ ಕಟ್ಟಬೇಕು ಎಂದು ರಾಜು ಬಿಬಿಎಂಪಿಗೆ ದೂರು ನೀಡಿದ್ದರು. ಇದರಿಂದ ಕೋಪಗೊಂಡ ದೇವಸ್ಯ ರೌಡಿಗಳನ್ನು ಬಿಟ್ಟು ರಾಜು ಮನೆಯವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆ ನಡೆಸಿದ ರೌಡಿಗಳು ಶಾಸಕ ಭೈರತಿ ಬಸವರಾಜು ಅವರ ಬೆಂಬಲಿಗರು ಎನ್ನಲಾಗಿದೆ. ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT