ಮುಂಡಗೋಡ ಅರಣ್ಯ ವಲಯದ ಸನವಳ್ಳಿ, ಇಂದೂರ, ಚವಡಳ್ಳಿ, ಕಾತೂರ ಅರಣ್ಯ ವಲಯದ ಭದ್ರಾಪುರ, ಮಳಗಿ ಧರ್ಮಾಕಾಲೊನಿ, ಹರಗನಹಳ್ಳಿ ಸೇರಿದಂತೆ ಹಲವು ಕಡೆ ತೊಟ್ಟಿಗಳನ್ನಿಟ್ಟು, ನೀರು ತುಂಬಿಸಲಾಗುತ್ತಿದೆ. ಕಳೆದ ವರ್ಷದ ಮೇ ನಲ್ಲಿ ಕಾತೂರ ಅರಣ್ಯ ವಲಯದಲ್ಲಿ ಈ ರೀತಿ ಪ್ರಯೋಗ ಮಾಡಿ ಯಶಸ್ವಿಯಾಗಿದ್ದರು. ಆದರೆ ಈ ಸಲ, ತಾಲ್ಲೂಕಿನಲ್ಲಿ ಬರದ ತೀವ್ರತೆ ಹೆಚ್ಚು ಇರುವುದರಿಂದ ಅರಣ್ಯ ಇಲಾಖೆ ಈ ಕಾರ್ಯಕ್ಕೆ ಮುಂದಾಗಿದೆ. ಕೆಲ ರೈತರೂ ಈ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ ಎಂದು ಕಾತೂರಿನ ವಲಯ ಅರಣ್ಯಾಧಿಕಾರಿ ಶ್ರೀಧರ ತೆಗ್ಗಿನಮನಿ ತಿಳಿಸಿದರು.