ಕಲ್ಲು ಬಿಸಾಕಿದವರು ಪ್ರಶಂಸಿದರು: ‘25ವರ್ಷಗಳ ಹೆಣ್ಮಕ್ಕಳ ಸ್ವಾತಂತ್ರ್ಯದ ಕುರಿತಾಗಿ ಬರೆದ ಜಿಹಾದ್ ಬಗ್ಗೆ ಅಲ್ಲೋಲ-ಕಲ್ಲೋಲ ಉಂಟಾಗಿ ನಾನು ಜೈಲು ವಾಸ ಅನುಭವಿಸಿದೆ. ಆ ದಿನದಲ್ಲಿ ನನ್ನ ಮೇಲೆ ಹಲ್ಲೆಯೂ ನಡೆದಿತ್ತು. ನನ್ನ ಮೇಲೆ ಕಲ್ಲು ಬಿಸಾಕಿದ್ದ ಒಬ್ಬ ವ್ಯಕ್ತಿ, ಬೆಂಗಳೂರಿನಲ್ಲಿ ನಡೆದ ನನ್ನ ಸ್ವಾತಂತ್ರ್ಯದ ಓಟ-ಕೃತಿಯ ಕುರಿತಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮುಸ್ಲಿಂ ಹೆಣ್ಮಕ್ಕಳು ಇಂದು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆಸಲು ಬೊಳುವಾರರ ಜಿಹಾದ್ ಕಾರಣ ಎಂದಾಗ, ಮನದಲ್ಲಿ ತೃಪ್ತಿ ಭಾವ ಮೂಡಿತು’ ಎಂದು ಬೊಳುವಾರು ಹೇಳಿದರು.