ನಿಯೋಗದ ಅಹವಾಲು ಆಲಿಸಿದ ಐಜಿಪಿ ಹರಿಶೇಖರನ್, ಭಟ್ಕಳದಲ್ಲಿ ಶಾಂತಿಭಂಗ ಉಂಟು ಮಾಡುವವರ ವಿರುದ್ಧ ಕಠಿಣ ನಿಲುವು ಹೊಂದುವಂತೆ ಎಸ್ಪಿ, ಡಿವೈಎಸ್ಪಿಯವರಿಗೆ ನಿರ್ದೇಶನ ನೀಡಲಾಗಿದ್ದು, ಇಂಥಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿ ಸುವಂತೆಯೂ ಸೂಚಿಸಲಾಗಿದೆ ಎಂದರು. ಅಲ್ಲದೇ ಭಟ್ಕಳದಲ್ಲಿನ ಎಲ್ಲಾ ಮಂದಿರ, ಮಸೀದಿ,ಚರ್ಚ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸು ವಂತೆಯೂ ಒತ್ತಾಯಿಸಿದ ಅವರು, ಇದರಿಂದ ಅಪರಾಧ ಎಸಗುವ ಅವಕಾಶ ತಪ್ಪುವುದಲ್ಲದೇ, ಆರೋಪಿಗಳ ಪತ್ತೆಗೂ ಸಹಕಾರಿಯಾಗುತ್ತದೆ ಎಂದರು.