ಸಿಂದಗಿ: ಶಾಂತವೀರ ಪಟ್ಟಾಧ್ಯಕ್ಷರ ಭಾವಚಿತ್ರದೊಂದಿಗೆ ಹೆಸರುಳ್ಳ ಬ್ಯಾನರ್ ನಗರದ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಅಕ್ಕನ ದರ್ಶನ ಪ್ರವಚನ ವೇದಿಕೆಯಲ್ಲಿತ್ತು. ಅದನ್ನು ಒಂದೇ ದಿನದಲ್ಲಿ ಕಿತ್ತು ತಂದು ಹೊರಗಡೆ ರಸ್ತೆಯಲ್ಲಿ ಕಟ್ಟಲಾಗಿರುವುದು ಶ್ರೀಗಳಿಗೆ ಮಾಡಿದ ಅವಮಾನ ಎಂದು ಶ್ರೀಗಳ ಭಕ್ತರು ಖಂಡಿಸಿದ್ದಾರೆ.
ಈ ಪ್ರಮಾದಕ್ಕೆ ಕ್ಷಮೆಯಾಚಿಸಿ ಕೂಡಲೇ ಅದೇ ಬ್ಯಾನರ್ ಅನ್ನು ವೇದಿಕೆಯಲ್ಲಿ ಕಟ್ಟಬೇಕು. ಪ್ರವಚನ ಸಮಿತಿಯೇ ಈ ಪ್ರಮಾದಕ್ಕೆ ಹೊಣೆ ಗಾರರು. ಇದನ್ನು ದುರುದ್ದೇಶ ಪೂರ್ವಕವಾಗಿ ಮಾಡ ಲಾಗಿದ್ದು, ಈ ಕೆಲಸ ಯಾರು ಮಾಡಿಸಿದ್ದಾರೆ ಎಂಬುದನ್ನು ಸಮಿತಿ ಬಹಿರಂಗ ಪಡಿಸಬೇಕು ಎಂದೂ ಒತ್ತಾಯಿಸಿದ್ದಾರೆ.
ಈ ಘಟನೆಯನ್ನು ತಾಲ್ಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘ, ವಿವಿಧ ಮಠಗಳ ಸ್ವಾಮೀಜಿಗಳು ಕೂಡ ಖಂಡಿಸಿದ್ದಾರೆ.
ಈ ಪ್ರಮಾದವನ್ನು ಪ್ರವಚನ ಸಮಿತಿ ತಕ್ಷಣವೇ ಸರಿಪಡಿಸಿಕೊಳ್ಳದಿದ್ದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಭಕ್ತರು ಎಚ್ಚರಿಕೆ ನೀಡಿದ್ದಾರೆ.