ಪುರಸಭೆ ವತಿಯಿಂದ ಪಟ್ಟಣದ ಸಂತೆ ಮೈದಾನದಲ್ಲಿ 10ನೇ ಹಣಕಾಸು ಯೋಜನೆಯಡಿ 1999ರಲ್ಲಿ 25 ಹಾಗೂ 2000ರಲ್ಲಿ 50 ಮಳಿಗೆ ನಿರ್ಮಾಣ ಮಾಡಿ, ಅಂದಿನ ಉಪಾವಿಭಾಗಾಧಿಕಾರಿ ಬಿ.ಬಿ.ಕಾವೇರಿ ಸಮ್ಮುಖದಲ್ಲಿ ಹರಾಜು ಪ್ರಕ್ರಿಯೆ ನಡೆಸಿ ಬಾಡಿಗೆಗೆ ನೀಡಲಾಗಿತ್ತು. ಮಳಿಗೆ ಪಡೆದವರು ಮುಂಗಡ ಪಾವತಿಸಿ ದಾಖಲೆ ಪತ್ರ ಸಿದ್ಧಪಡಿಸಿಕೊಳ್ಳಲು ನಿರಾಸಕ್ತಿ ತೋರಿದರೆ, ಅಧಿಕಾರಿಗಳು ಬಾಡಿಗೆ ಕರಾರು ಪತ್ರ ಮಾಡಿಕೊಳ್ಳಲು ನಿರಾಸಕ್ತಿ ತೋರಿದ ಪರಿಣಾಮ ಇಂದು ಅತಂತ್ರ ಸ್ಥಿತಿ ತಲುಪಿದೆ.