ಪರವಾನಗಿ ಪಡೆದ ಗೂಂಡಾಗಳಂತೆ ವರ್ತಿಸುವ ಕೆಲವು ಪೊಲೀಸರಿಂದ ಜನಸಾಮಾನ್ಯರ ಬದುಕಿಗೆ ಪಾರ್ಶ್ವವಾಯು ಹೊಡೆದಂತಹ ಅನುಭವವಾಗುತ್ತಿದೆ. ಇಂತಹವರು ನಾಗರಿಕರ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸುವುದಿರಲಿ, ಅವುಗಳನ್ನು ದೊಡ್ಡ ಸಮಸ್ಯೆಗಳನ್ನಾಗಿ ಪರಿವರ್ತಿಸುವ ಜಾಣ್ಮೆ ಹೊಂದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಮಾನವೀಯತೆಯ ಸೆಲೆ ಮಾಯವಾಗುತ್ತಿರುವುದನ್ನು ಹಿರಿಯ ಅಧಿಕಾರಿಗಳು ಗುರುತಿಸಿ ಕಠಿಣ ಕ್ರಮ ಕೈಗೊಳ್ಳದ ಹೊರತು ವ್ಯವಸ್ಥೆ ಸುಧಾರಿಸದು. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಕೇವಲ ಘೋಷಣೆಗೆ ಸೀಮಿತವಾಗದಿರಲಿ.
-ಆರ್.ಎನ್.ಸತ್ಯನಾರಾಯಣ ರಾವ್, ಮೈಸೂರು