‘ನಾವು ದೌರ್ಜನ್ಯಕೋರರ ಮುಂದೆ ಮಂಡಿಯೂರಿ ದೀನಭಾವದಿಂದ ಪ್ರಾರ್ಥಿಸಿಕೊಳ್ಳುವುದರಿಂದ, ಕಳೆದುಕೊಂಡ ಹಕ್ಕುಗಳನ್ನು ಮರಳಿ ಗಳಿಸುವುದು ಅಸಾಧ್ಯ. ಜನರು ಮೇಕೆಗಳನ್ನು ಬಲಿ ಕೊಡುತ್ತಾರೆ ಹೊರತು ಹುಲಿಗಳನ್ನಲ್ಲ’ ಎಂಬ ಮಾತನ್ನು ಬಾಬಾಸಾಹೇಬರು ಆಡಿದ್ದರು. ಇಂತಹ ಆತ್ಮವಿಶ್ವಾಸದ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಹೋರಾಟ ಮುಂದುವರಿಸಬೇಕು. ‘ಇಲ್ಲಿ ಈಸಬೇಕು, ಇದ್ದು ಜೈಸಬೇಕು’ ಎಂಬ ದಾಸರ ನುಡಿಯಂತೆ, ಆಶಾವಾದಿಗಳಾಗಿ ಬಾಬಾಸಾಹೇಬರ ಚಿಂತನೆಯ ಹಾದಿಯಲ್ಲಿ ಸಾಗಬೇಕು. ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ.
-ಡಾ. ಸಂದೀಪ್ ಕುಮಾರ ಕೆ.ಸಿ., ಬೆಂಗಳೂರು