‘ಇನ್ನು ಬೆದರಿಕೆ ಹಾಕಿದವರು, ಇವಳು ಅಮಾಯಕಿ ಅನ್ನೋ ಕಾರಣಕ್ಕೆ ಹಾಕಿದಾರೆ. ಅದೇ ದೊಡ್ಡ ದೊಡ್ಡವರ ಮೇಲೆ ಹಾಕ್ಲಿ. ಅವರು ಸುಮ್ನೆ ಬಿಡ್ತಾರಾ!’ ಎಂದರು. ಹೌದು, ಯಾರೋ ಕೆಲವರು ಹಾಕಿದ ಬೆದರಿಕೆಗೆ ಇಡೀ ಧರ್ಮದ ಜನರನ್ನು ದೂಷಿಸುವುದು ಎಷ್ಟು ಸರಿ? ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಬದಲಾಗಬೇಕಿದೆ. ಜಾತ್ಯತೀತ ರಾಷ್ಟ್ರದಲ್ಲಿ ಎಲ್ಲವನ್ನೂ ಜಾತಿ, ಧರ್ಮದ ದೃಷ್ಟಿಕೋನದಲ್ಲಿ ಪ್ರತ್ಯೇಕಿಸಿ ನೋಡುವುದನ್ನು ಬಿಡಬೇಕು. ಆಗ ಮಾತ್ರವೇ ಕಲೆ, ಸಂಗೀತದಂಥ ಕ್ಷೇತ್ರಗಳಲ್ಲಿ ಯುವ ಪ್ರತಿಭೆಗಳು ಬೆಳೆಯಲು ಸಾಧ್ಯ.
-ಜಯಪ್ರಕಾಶ್ ಬಿರಾದಾರ್, ದಾವಣಗೆರೆ