ಬೆಂಗಳೂರು: ಸಂಜಯನಗರ ಸಮೀಪದ ಅಮರ್ ಜ್ಯೋತಿ ಬಡಾವಣೆಯ ನಿವಾಸಿ ಕೆ.ಸಿ. ಶರತ್ ಕುಮಾರ್ (35) ಇತ್ತೀಚೆಗೆ ಮೃತಪಟ್ಟರು. ಅವರಿಗೆ ಪತ್ನಿ, ಪುತ್ರ, ತಂದೆ ಹಾಗೂ ತಾಯಿ ಇದ್ದಾರೆ.
ಟಾಟಾ ಕಂಪೆನಿಯ ಉದ್ಯೋಗಿಯಾಗಿದ್ದ ಅವರು, ಇತ್ತೀಚೆಗೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.ಶರತ್ ಅವರ ತಂದೆ ಎಂ.ಚಿಕ್ಕಯ್ಯ ಅವರ ಸಂಪರ್ಕಕ್ಕೆ: 99804 17926.
ಭರತ್ ಇನಾಮ್ದಾರ್
ನೆಲಮಂಗಲ: ಸಮೀಪದ ಜಿಂದಾಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಭರತ್ ಇನಾಮ್ದಾರ್(46) ಹೃದಯಾ
ಘಾತದಿಂದ ಸೋಮವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಪತ್ನಿ ಮತ್ತು ಮಗ ಇದ್ದಾರೆ. ಅವರು ಕಿಡ್ನಿ ಮತ್ತು ಕಣ್ಣುಗಳನ್ನು ದಾನ ಮಾಡಿದ್ದಾರೆ. ಮಂಗಳವಾರ ಸಂಜೆ ಬೆಂಗಳೂರಿನ ಪೀಣ್ಯದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.