ಮುಂದುವರಿದು ವಿಷಯ ಪ್ರಸ್ತಾಪಿಸಿ ಮಾತನಾಡಿದ ತಾ.ಪಂ ಸದಸ್ಯ ಕಾರಹಳ್ಳಿ ಶ್ರೀನಿವಾಸ್ 2011ರಿಂದ ಗಣಿಗಾರಿಕೆ ನಿಲ್ಲಿಸಲಾಗಿದೆ ಎಂದು ಸರ್ಕಾರದ ಆದೇಶವಿದೆ, ಅಲ್ಪ ಸ್ವಲ್ಪ ಮರಳು ದಂಧೆ ನಡೆಯುತ್ತಿದೆ. ಕಲ್ಲು ಗಣಿಗಾರಿಕೆಯ ಜತೆಗೆ ಕಲ್ಲು ಕೊಯ್ಲು ಘಟಕ ಎಲ್ಲೆಂದರಲ್ಲಿ ತಲೆ ಎತ್ತುತ್ತಿವೆ. ರಾತ್ರಿ ಬಿಟ್ಟು ಹಗಲು ವೇಳೆಯಲ್ಲೆ ಕಲ್ಲು ಅಕ್ರಮ ದಿಮ್ಮಿಗಳು ಸಾಗಿಸಲಾಗುತ್ತಿದೆ. ತೈಲಗೆರೆ, ಮಾಯಾಸಂದ್ರ, ಕೊಯಿರಾ ಮತ್ತು ಚಿಕ್ಕಗೊಲ್ಲಹಳ್ಳಿ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಪರಿಸರ, ಅಂತರ್ಜಲ ಪರಿಸ್ಥಿತಿ ಏನು ಎಂದು ತಹಶೀಲ್ದಾರ ಅವರನ್ನು ಪ್ರಶ್ನಿಸಿದರು.