ಕರ್ನಾಟಕದ ಮುಂದಿನ ಚುನಾವಣಾ ಪ್ರಚಾರದ ಭಾಗವಾಗಿ ಪ್ರಧಾನಿ ಅವರಿಂದ ಈ ಮಾರ್ಗವನ್ನು ಉದ್ಘಾಟಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂಬ ಸುದ್ದಿಯಿದೆ.
ರಾಜಕೀಯ ಕಾರಣಕ್ಕೆ ಈ ಹೊಸ ರೈಲು ಮಾರ್ಗವನ್ನು ತಡೆಹಿಡಿದು ಇಲಾಖೆಗೆ ನಷ್ಟ ಉಂಟು ಮಾಡುವ ಬದಲು, ಈ ಮಾರ್ಗವನ್ನು ತಕ್ಷಣ ಸಾರ್ವಜನಿಕರ ಬಳಕೆಗೆ ತೆರೆಯಬೇಕು. ಇದರಿಂದ ಸ್ಥಳೀಯರಿಗೆ ಬಹಳಷ್ಟು ಅನುಕೂಲ ಆಗುವುದಲ್ಲದೆ, ಕ್ರಮೇಣ ಈ ಮಾರ್ಗದಲ್ಲಿ ಮಂಗಳೂರು– ಕಾರವಾರ ರೈಲುಗಳನ್ನೂ ಓಡಿಸಿ, ಕರಾವಳಿಯವರಿಗೆ ಈಗಿನ ಸುತ್ತುಬಳಸು ಮಾರ್ಗದಿಂದ ಆಗುತ್ತಿರುವ ಸುಮಾರು ಮೂರು ಗಂಟೆ ಹೆಚ್ಚುವರಿ ಪ್ರಯಾಣವನ್ನು ಕಡಿತಗೊಳಿಸಬಹುದು.
-ಅಭಿಷೇಕ್ ಪಡಿವಾಳ್, ಸುಳ್ಯ