ನಾಯಕನಹಟ್ಟಿ (ಚಿತ್ರದುರ್ಗ ಜಿಲ್ಲೆ): ಮಾನವರಹಿತ ಲೆವೆಲ್ ಕ್ರಾಸಿಂಗ್ನಲ್ಲಿ ಆಂಬುಲೆನ್ಸ್ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಐವರು ಹೆಣ್ಣುಮಕ್ಕಳು ಮೃತಪಟ್ಟ ಘಟನೆ ಚಳ್ಳಕೆರೆ ತಾಲ್ಲೂಕಿನ ಮನ್ನೇಕೋಟೆಯ ಬಳಿ ಗುರುವಾರ ರಾತ್ರಿ 7.20ರ ಸುಮಾರಿಗೆ ಸಂಭವಿಸಿದೆ.
ಘಟನೆಯ ಹಿನ್ನೆಲೆ: ಕೇವಲ ಏಳು ದಿನಗಳ ಹಿಂದೆ ಬಂಡೆ ತಿಮ್ಮಲಾಪುರದ ನಿವಾಸಿ ಗಂಗಮ್ಮ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಗುರುವಾರ ಮಗುವಿನ ಆರೋಗ್ಯದಲ್ಲಿ ಏರುಪೇರಾದ ನಿಮಿತ್ತ ತಳಕು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದರು. ನಂತರ ಬಂಡೆತಿಮ್ಮಲಾಪುರಕ್ಕೆ ಆಂಬುಲೆನ್ಸ್ನಲ್ಲಿ ಹಿಂತಿರುಗುವಾಗ ಮನ್ನೆಕೋಟೆಯ ಬಳಿ ಇರುವ ತಡೆರಹಿತ ಲೆವೆಲ್ಕ್ರಾಸಿಂಗ್ ಬಳಿ ಹಳಿಯನ್ನು ದಾಟುತ್ತಿದ್ದಾಗ ಹೊಸಪೇಟೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ರೈಲು ರಭಸವಾಗಿ ಡಿಕ್ಕಿಹೊಡೆದಿದೆ.