ಬಹಳಷ್ಟು ಜನ ಇಂದು ತಮ್ಮ ಸುಖಕರ ಪ್ರಯಾಣಕ್ಕೆ ರೈಲನ್ನು ಅವಲಂಬಿಸಿದ್ದಾರೆ. ಈ ಕಾರಣಕ್ಕಾಗಿ ತಮ್ಮ ಅಮೂಲ್ಯವಾದ ಸಮಯವನ್ನು ಅವರು ರೈಲಿಗಾಗಿ ಕಾಯುತ್ತಾ ನಿಲ್ದಾಣಗಳಲ್ಲಿ ಕಳೆಯಬೇಕಾಗುತ್ತದೆ.
ಇಂತಹ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಜಿಲ್ಲಾ ಕೇಂದ್ರ ಹಾಗೂ ರಾಜಧಾನಿಯ ರೈಲು ನಿಲ್ದಾಣಗಳಲ್ಲಿ ಸುಸಜ್ಜಿತ ಗ್ರಂಥಾಲಯಗಳನ್ನು ಸ್ಥಾಪಿಸಬೇಕು. ಅಲ್ಲಿ ಕಂಪ್ಯೂಟರ್, ಅಂತರ್ಜಾಲ ಸೇವೆ ಒದಗಿಸಿದರೆ ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರಿಗೆ ಉಪಯೋಗವಾಗುತ್ತದೆ. ಓದುವ ಅಭಿರುಚಿ ರೂಢಿಸಿಕೊಳ್ಳಲು ನೆರವಾಗುತ್ತದೆ.
ಇದು ಒಂದೆಡೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುತ್ತದೆ. ಮತ್ತೊಂದೆಡೆ ಜ್ಞಾನಾಭಿವೃದ್ಧಿಗೆ ವೇದಿಕೆಯಾಗಿಯೂ ಕೆಲಸ ಮಾಡುತ್ತದೆ.
-ಡಾ. ಬಸವರಾಜ್ ಎನ್. ಅಕ್ಕಿ, ಧಾರವಾಡ