ಕರಾಚಿ/ನವದೆಹಲಿ: ಸೋದರಿಯನ್ನು ಭೇಟಿ ಮಾಡಲು ಹೋಗಿ ನಾಪತ್ತೆಯಾಗಿದ್ದ ಭಾರತದ ಇಬ್ಬರು ಮೌಲ್ವಿಗಳು ಪತ್ತೆಯಾಗಿದ್ದು, ಅವರಿಬ್ಬರೂ ನಾಳೆ ದೆಹಲಿಗೆ ತಲುಪಲಿದ್ದಾರೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
‘ಇಬ್ಬರು ಮೌಲ್ವಿಗಳನ್ನು ಪತ್ತೆ ಮಾಡಿ ಕರಾಚಿಗೆ ಕಳುಹಿಸಿರುವುದನ್ನು ಪಾಕಿಸ್ತಾನದ ವಿದೇಶಾಂಗ ಕಚೇರಿ ನಿನ್ನೆ ದೃಢಪಡಿಸಿತ್ತು.
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನ ಪ್ರಧಾನಿಯವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ ಅವರೊಂದಿಗೆ ಮಾತನಾಡಿದ ಬಳಿಕ ಈ ವಿಷಯ ದೃಢಪಟ್ಟಿದೆ.
I just spoke to Syed Nazim Ali Nizami in Karachi. He told me that they are safe and will be back in Delhi tomorrow. #Nizamuddin