ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಹಾಡುಗಳನ್ನು ನಟ ಸುದೀಪ್ ಅದ್ದೂರಿ ವೇದಿಕೆಯಲ್ಲಿ ಅನಾವರಣ ಮಾಡಿದರು. ಕನ್ನಡ ಅವತರಣಿಕೆಯ ಐದು ಹಾಡುಗಳನ್ನು ವಿ. ನಾಗೇಂದ್ರಪ್ರಸಾದ್ ಬರೆದಿದ್ದಾರೆ. ಚಿನ್ಮಯಿ, ಶ್ರೇಯಾ ಘೋಶಾಲ್, ಸುನಿಲ್ ಕಶ್ಯಪ್, ಮಾಳವಿಕಾ, ಪ್ರಣವಿ, ಯಾಸಿನ್ ನಾಜಿರ್, ಹೇಮಚಂದ್ರ ಹಾಡಿದ್ದಾರೆ. ಅವಿನಾಶ್, ಠಾಕುರ್ ಅನೂಪ್ ಸಿಂಗ್, ಅಲಿ, ತುಳಸಿ ಶಿವಮಣಿ ತಾರಾಗಣದಲ್ಲಿದ್ದಾರೆ. ಮುಖೇಶ್ ಜಿ. ಛಾಯಾಗ್ರಹಣ, ಸುನಿಲ್ ಕಷ್ಯಪ್ ಸಂಗೀತ ಚಿತ್ರಕ್ಕಿದೆ. ಹಿಂದಿಯಲ್ಲೂ ಸಿನಿಮಾ ಮರುನಿರ್ಮಾಣ ಆಗಲಿದೆ.