ನವದೆಹಲಿ: ಅರುಣಾಚಲ ಪ್ರದೇಶದ ಸೇಲಾ ಪಾಸ್ನಲ್ಲಿ ಹಿಮ ಬಿರುಗಾಳಿಗೆ ಸಿಲುಕಿದ್ದ 127 ಮಂದಿ ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಿಸಿದೆ.
ಆದರೆ, ಆರು ಮಂದಿ ವಿದೇಶೀಯರು ಇದ್ದ ತಂಡದಲ್ಲಿ ಬಲ್ಗೇರಿಯಾದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಉಳಿದ ಐವರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ಮಧ್ಯಾಹ್ನ 2.45ರ ಸುಮಾರಿಗೆ ಹಿಮ ಬರುಗಾಳಿ ಬೀಸಿ, ಪ್ರವಾಸಿಗರಿದ್ದ ವಾಹನಗಳು ಹಿಮದಲ್ಲಿ ಸಿಲುಕಿಕೊಂಡಿದ್ದವು.
ಸುಮಾರು 3.15ರ ವೇಳೆಗೆ ಸ್ಥಳ ತಲುಪಿದ ಸೇನೆಯ 71ನೇ ವಿಭಾಗೀಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಕಾರ್ಯಾಚರಣೆ ಮಧ್ಯ ರಾತ್ರಿವರೆಗೆ ನಡೆಯಿತು.