ಇವುಗಳನ್ನು ಒಂದೊಂದಾಗಿ ಜಾರಿಗೆ ತರಲು ಪ್ರಯತ್ನಿಸಲಾಗುವುದು. ತರಕಾರಿ ಮಾರುಕಟ್ಟೆ ಒಳಗೆ ಬೆಳಿಗ್ಗೆ ಯಾವುದೇ ವಾಹನಗಳು ಬಾರದಂತೆ ನಿಗದಿ ಸ್ಥಳದಲ್ಲಿಯೇ ನಿಲುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸದ್ಯಕ್ಕೆ 180 ಜನ ಮಾತ್ರ ಅಧಿಕೃತವಾಗಿ ಅಂಗಡಿಗಳನ್ನು ನಡೆಸಲು ಪರವಾನಗಿ ಹೊಂದಿದ್ದಾರೆ. ಉಳಿದವರು ಅನಧಿಕೃತವಾಗಿ ಎಲ್ಲೆಂದರಲ್ಲಿ ಅಂಗಡಿ ಇಟ್ಟುಕೊಂಡಿದ್ದಾರೆ. ಹೊಸದಾಗಿ ಪರವಾನಗಿಯನ್ನು ಮಾಡುವ ಮೂಲಕ ಎಲ್ಲರನ್ನು ಅಧಿಕೃತಗೊಳಿಸಲಾಗುವುದು ಇದರಿಂದ ಸಂಸ್ಥೆಗೆ ಲಾಭಬರುವುದಲ್ಲದೆ. ಮಾರುಕಟ್ಟೆಯುನ್ನು ಶಿಸ್ತಿಗೆ ತರಲಾಗುವುದು ಎಂದರು.
ಎಪಿಎಂಸಿ ಉಪಾಧ್ಯಕ್ಷ ಟಿ.ಮಂಜುನಾಥ್, ನಿರ್ದೇಶಕರಾದ ಬಿ.ವಿ. ಲೋಕೇಶ್, ಎಂ. ಗೋವಿಂದರಾಜು, ಸೋಮಣ್ಣ, ವಿ. ಗೋವಿಂದರಾಜು, ಕೆ.ಸಿ. ಲಕ್ಷ್ಮೀನಾರಾಯಣ್, ಗಂಗಯ್ಯ, ಕೆ. ನಾರಾಯಣಸ್ವಾಮಿ, ಕೆ.ವಿ. ಮಂಜು ನಾಥ್, ಸುಧಾಕರ್, ಎಸ್.ಜಿ. ಸೋಮರುದ್ರ ಶರ್ಮ ಉಪಸ್ಥಿತರಿದ್ದರು.