ಮಾಗಡಿ: ಜಡೆದೇವರ ಮಠಾಧೀಶರ ಮಹದಾಸೆಯಂತೆ ಮಳೆ ಬೆಳೆಯಾಗಿ ಜನತೆಯಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಜಡೆದೇವರ ಮಠದಲ್ಲಿ ಸೋಮವಾರ ಲೋಕ ಕಲ್ಯಾರ್ಥವಾಗಿ ನಡೆದ ವರುಣ ಪರ್ವ ಮಹಾಯಾಗ ಹಾಗೂ ಏಕಾದಶ ರುದ್ರಾಭಿಷೇಕ ಪೂಜೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ವಾನ್ ಮಹದೇವ ಶಾಸ್ತ್ರಿ ಮಾತನಾಡಿ, ತಾಲ್ಲೂಕಿನಲ್ಲಿ ಪಶುಪಕ್ಷಿ ಪ್ರಾಣಿಗಳಿಗೆ ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿವೆ. ವರುಣ ದೇವನ ಕೃಪೆಗಾಗಿ ವರುಣ ಪರ್ವ ಮಹಾಯಾಗ ನಡೆಯುತ್ತಿದೆ ಎಂದರು.
ವೀರಶೈವ ಮಂಡಳಿಯ ಅಧ್ಯಕ್ಷ ರುದ್ರಮೂರ್ತಿ, ನಟರಾಜು, ಆನಂದಪ್ಪ, ಪುರಸಭೆ ಸದಸ್ಯೆ ಶಿವರುದ್ರಮ್ಮ ವಿಜಯಕುಮಾರ್, ಉಮಮಹೇಶ್ವರ ಸ್ವಾಮಿ ಮಾತನಾಡಿದರು. ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮಿ ಮಾತನಾಡಿದರು.
ಅಕ್ಕಮಹಾದೇವಿ ಮಹಿಳಾ ಸಮಾಜ, ವೀರಶೈವ ಯುವಜನ ಸಂಘ ಮತ್ತು ವೀರಶೈವ ಮಂಡಳಿಯ ಪದಾಧಿಕಾರಿಗಳು, ಭಕ್ತರು ಇದ್ದರು.